Showing posts with label ಪ್ರೀತಿ. Show all posts
Showing posts with label ಪ್ರೀತಿ. Show all posts

Monday, May 2, 2011

'ಕಾಪ' ಪಂಚಾಯಿತಿ!


ಸುನೀತಾ(21) ಮತ್ತು 'ಜಸ್ಸಾ' ಉರ್ಫ್ ಜಸ್ಬೀರ್ ಸಿಂಗ(22) ಒಬ್ಬರನ್ನೊಬ್ಬರು ಪ್ರೀತಿಸಿ.. ’ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು’ ಅಂದು ಕೊಂಡು ಮನೆಯವರ ಮತ್ತು ಊರಿನವರ ವಿರೋಧದ ನಡುವೆ ಮದುವೆಯಾಗಿದ್ದರು! ತಮ್ಮ ಪುಟ್ಟ ಸಂಸಾರ, ಪುಟ್ಟ ಮನೆ ಮತ್ತೆ ತಮಗೆ ಒಂದು ಪುಟ್ಟ ಮಗುವಿನ ಬರುವಿಗೆ ಕಾಯ್ತಾ ಹಾಯಾಗಿದ್ದರು ಅಂದರೆ ಸುನೀತಾ ೫ ತಿಂಗಳ ಗರ್ಬಿಣಿ!.
ಹೀಗೆ ಎಲ್ಲವೂ ಚೆನ್ನಾಗಿರುವಾಗ ಒಂದು ದಿನ ಮುಂಜಾನೆ ಸುನಿತಾಳ ತಂದೆಯ ಮನೆ ಮುಂದೆ ಅತೀ ಕ್ರೂರತನಕ್ಕೆ ಸಾಕ್ಷಿಯಾಗಿ ಎರಡು ದೇಹಗಳು ಬಿದ್ದಿದ್ದವು! ಅಬ್ಬಾ ಎಂತಹ ರಾಕ್ಷಸರು ಅಂತೀರಾ ಗರ್ಬಿಣಿಯ ಹೊಟ್ಟೆಗೆ ಒದ್ದಿದ್ದರು, ಮುಖಕ್ಕೆ ಗುದ್ದಿದ್ದರು ಮತ್ತು ಎರಡು ದೇಹಗಳಿಗೆ ಇರಿದಿದ್ದರು!

ಇತ್ತೀಚಿಗ ನಮ್ಮ ಸರ್ವೋಚ್ಚ ನ್ಯಾಯಾಲಯ 'ಕಾಪ' ಪಂಚಾಯಿತಿಗಳನ್ನ ಬೇರು ಸಮೇತ ಕಿತ್ತುಹಾಕಿ ಅಂತಾ ಅತೀ ಕಠಿಣವಾದ ಎಚ್ಚರಿಕೆಯನ್ನ ಎಲ್ಲ District Magistrate ಮತ್ತು SP ಗಳಿಗೆ ಕೊಟ್ಟಿದೆ! ಅದಾಗ್ಯೂ ಇ 'ಕಾಪ' ಪಂಚಾಯತಿಗಳು ನಮ್ಮ ಸರ್ವೋಚ್ಚ ನ್ಯಾಯಾಲಯವೆ ತಪ್ಪು ಅನ್ನೋತರಹದಲ್ಲಿ ಹೇಳಿಕೆಗಳನ್ನು ನೀಡುತ್ತ ಇದ್ದಾವೆ. ಹಾಗಿದ್ದರೆ ಏನಿದು ಇ 'ಕಾಪ' ಪಂಚಾಯತಿಗಳ ಪಂಚಾಯಿತಿ?

ಉತ್ತರ ಭಾರತದ ರಾಜ್ಯಗಳಾದ ಹರ್ಯಾಣಾ, ಉತ್ತರ ಪ್ರದೇಶ, ರಾಜಸ್ತಾನ ಮುಂತಾದ ರಾಜ್ಯಗಳಲ್ಲಿ ಕಂಡು ಬರುವ 'ಕಾಪ್' ಪಂಚಾಯಿತಿಗಳು ಮೇಲ್ನೋಟಕ್ಕೆ ನಮ್ಮ ಹಿಂದಿನ ಕಾಲದಲ್ಲಿದ್ದ ಪಂಚಾಯತಿ ಕಟ್ಟೆಗಳ ತರಃ ಕೆಲಸ ಮಾಡುತ್ತವೆ. ಸುಮಾರು ೧೪ನೇ ಶತಮಾನದಿಂದ ನಡೆಯುತ್ತಾ ಬಂದಿರುವ 'ಕಾಪ' ಪಂಚಾಯತಿಗಳು ಜಾತಿ, ಗೋತ್ರ ಮತ್ತು ಸ್ಥಳಗಳಿಂದ ಒಗ್ಗೂಡಿದಂತ ಹಳ್ಳಿಗಳಲ್ಲಿ ಪ್ರಚಲಿತದಲ್ಲಿವೆ. ಹಿಂದಿನ ಕಾಲದಲ್ಲಿ ಮೇಲಾಗಿ ಉನ್ನತ ಜಾತಿಯವರು ತಮ್ಮ ಅಧಿಕಾರ ಮತ್ತು ಶಕ್ತಿಯ ಉಳಿವಿಗಾಗಿ ಇ ಪಂಚಾಯತಿಗಳನ್ನ ನಿರ್ಮಿಸಿದರು.
ಒಂದೇ ಗೊತ್ರಗಳನ್ನು ಹೊಂದಿರುವ ಹಳ್ಳಿಗಳ 'ಕಾಪ' ಪಂಚಾಯತಿಗಳ ಪ್ರಕಾರ ಆ ಹಳ್ಳಿಗಳಲ್ಲಿ ಇರುವ ಎಲ್ಲರೂ ಅಣ್ಣತಮ್ಮಂದಿರು ಮತ್ತು ಅಕ್ಕತಂಗಿಯರು. ಇಂತ ಪಂಚಾಯತಿಗಳ ಅಡಿಯೇಲ್ಲಿ ಬರುವ ಎಲ್ಲ ಹಳ್ಳಿಗಳಲ್ಲಿ Love marriage ಗಳು ನಿಶಿದ್ದ! ಇ ಪಂಚಾಯತಿಗಳ ಒಳಗೆ ಬರುವ ಬೇರೆ ಬೇರೆ ಹಳ್ಳಿಗಳ ನಡುವೆಯೂ ಮದುವೆ ನಿಶಿದ್ದ! ಇದನ್ನೆನಾದರು ಮೀರಿ ಯಾರಾದರು ನಡೆದುಕೊಂಡರೆ ಅವರಿಗೆ ಮೃತ್ಯುವೇ ಗತಿ!
ಇ 'ಕಾಪ' ಪಂಚಾಯತಿಗಳು ತಪ್ಪು ಮಾಡಿದವರಿಗೆ ಕೊಡುವ ಶಿಕ್ಷೆಗಳು ಅತೀಯಾದ ದಂಡ, ಸಮಾಜದಿಂದ ಬಹಿಷ್ಕಾರ ಮತ್ತು ಹೆಚ್ಚಾಗಿ ಕೊಲೆಗಳಿಂದ ಅಥವಾ ಆತ್ಮಹತ್ತೆ ಮಾಡಿಕೊಳ್ಳುವ ಹಾಗೆ ಒತ್ತಡದಿಂದ ಕೊನೆಗೊಳ್ಳುತ್ತವೆ.

ಸುನೀತಾ ಮತ್ತು ’ಜಸ್ಸಾ’ಗೂ ಆಗಿದ್ದು ಇದೆ! ಇಬ್ಬರನ್ನು ರಾತ್ರಿ ಮನೆಯಿಂದ ಹೊರಗೆಳೆದುಕೊಂಡು ಹೋಗಿ ಮುಂಜಾನೆ ಅವರ ದೇಹಗಳನ್ನು ಸುನಿತಾಳ ಮನೆಯ ಮುಂದೆ ಎಸೆದು ಹೋಗಿದ್ದರು ಯಾಕೆಂದರೆ ಅದೂ ಇಡೀ ಊರಿಗೆ ಗೊತ್ತಾಗಬೇಕು ಮತ್ತು ಉಳಿದವರಿಗೆ ಎಚ್ಚರಿಕೆ ಯಾಗಬೇಕು! ಅವರಿಬ್ಬರೂ ಮಾಡಿದ ತಪ್ಪು ಏನೆಂದರೆ ಒಂದೇ ಊರಿನವರಾಗಿ ಪ್ರೀತಿಸಿ ಮದುವೆಯಾಗಿದ್ದು!
ಇದು ನಡೆದದ್ದು ೨೦೦೮ ಮೇ ೯ ರಂದು ಹರ್ಯಾಣಾ ರಾಜ್ಯದ ಬಲ್ಲಾ ಎಂಬ ಹಳ್ಳಿಯೆಲ್ಲಿ! ವಿಚಿತ್ರ ಎಂದರೆ ಇ ಗಟನೆಗೆ ಇಡೀ ಹಳ್ಳಿಯೇ ಹೆಮ್ಮೆಯಿಂದ Support ಆಗೀ ನಿಂತಿತ್ತು... ಆದರೆ ಕೊಲೆಗಡುಕರ ಪರವಾಗಿ! ಇದೇ ಕಾಪ ಪಂಚಾಯತಿಗಳ ವಿಶೇಷ! ಇದೇ Honour Killing!
ಇ ಕಾಪ ಪಂಚಾಯತಿಗಳು ಇಂದಿಗೂ ಇಷ್ಟು ಬಲಿಷ್ಠವಾಗಿ ಬೆಳೆದಿವೆ ಅಂದರೆ ಇದಕ್ಕೆ ಮುಖ್ಯ ಕಾರಣ ನಮ್ಮ ದುರ್ಬಲ ಪಂಚಾಯತ್ ರಾಜ್ ವ್ಯವಸ್ತೆ ಅಂದರೆ ತಪ್ಪಾಗಲಾರದು. ಜನರು ಕಾಪ ಪಂಚಯತಿಗಳಲ್ಲಿ ವಿಶ್ವಾಸವೆಕೆ ಇಟ್ಟಿದ್ದಾರೆ ಅಂತ ಅದರ ಹಿಂದೆ ಹೋದರೆ
೧) ಇಲ್ಲಿ ಯಾವುದೇ ವ್ಯಾಜ್ಯಗಳನ್ನ ಪ್ರಮುಕರಾದ ೧೦ ರಿಂದ ೧೫ ಜನರು ಕುಳಿತಲ್ಲಿಯೇ ಒಂದೇ ದಿನದಲ್ಲಿ ಬಗೆ ಹರಿಸುತ್ತಾರೆ ... ಅದನ್ನ ನಮ್ಮ ಕೊರ್ಟಗಳಿಗೆ ಒಯ್ಯದರೆ ಕನಿಷ್ಠ ೪ ರಿಂದ ೫ ವರ್ಷ! ಅಥವಾ ಇನ್ನೂ ಹೆಚ್ಚು!
೨) ಕೊರ್ಟಗಳಿಗೆ ತಮ್ಮ ಕೆಲಸಗಳನ್ನ ಬಿಟ್ಟು ಅಲೆಯುದು ಮತ್ತು ಪೋಲಿಸರಿಂದ ಕಿರುಕಳ ಅನುಭವಿಸುವುದು ಇರುವುದಿಲ್ಲ.
ಆದರೆ ಇ ಕೆಲುವೊಂದು ಉಪಯೋಗಗಳನ್ನು ಬಿಟ್ಟರೆ ಇದೊಂದು ಅತೀ ಕ್ರೂರ ವ್ಯವಸ್ತೆಯೇ ಸರಿ ಇಲ್ಲಿ ಮಹಿಳೆಯರಿಗೆ ಯಾವುದೇ ಅಧಿಕಾರ ಇಲ್ಲಾ, ಕೆಲೋವೊಮ್ಮೆ ಗಂಡು ಮಕ್ಕಳಿಗೆ ಶಿಕ್ಷೆಯಿಂದ ವಿನಾಯತಿ ಸಿಗುತ್ತೆ ಆದರೆ ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ಸಿಗುವುದಿಲ್ಲ, ಇ ಪಂಚಾಯತಿಗಳ ವಿರುದ್ದ ಯಾರಾದರು ಮಕ್ಕಳಿಗೆ Support ಮಾಡಿದರೆ ಇಡೀ ಮನೆತನವನ್ನು ಬಹಿಸ್ಕಾರ ಮಾಡಲಾಗುತ್ತೆ ! ಲಕ್ಷಾಂತರ ರೂಪಾಯಿಗಳ ದಂಡವನ್ನು ವಿದಿಸಲಾಗುತ್ತೆ.

ದುರ್ದೈವದ ಸಂಗತಿ ಎಂದರೆ ಕಾಪ ಪಂಚಾಯತಿಗಳ ಅಡಿಯೇಲ್ಲಿ ಬರುವ ಎಲ್ಲ ಹಳ್ಳಿಗಳು ಇವುಗಳ ಮೇಲೆ ಪ್ರಶ್ನಾತೀತ ವಿಶ್ವಾಸವನ್ನು ಇಟ್ಟಿರುವುದು! ಮತ್ತು ಇವುಗಳಲ್ಲಿ ಮಹಿಳೆಯರಿಗೆ ಯಾವುದೇ ಹಕ್ಕುಗಳಿರದೆ ಇರುವುದು. ಇವಗಳನ್ನು ಹತ್ತಿಕ್ಕಲು ಯಾವುದೇ ರಾಜಕೀಯ ನಾಯಕರಾಗಲಿ, ಪಕ್ಷಗಳಾಗಲಿ ಪ್ರಯತ್ನಿಸುತ್ತಿಲ್ಲಾ ಏಕೆಂದರೆ ವೋಟು ಬ್ಯಾಂಕ್! ಮತ್ತು ಕಾಪ ಪಂಚಾಯತಿಗಳ ಒಗ್ಗಟ್ಟು!

ಇನ್ನೂ ನಮ್ಮ ಸಮಾಜದಲ್ಲಿ ಇಂತಹ ವ್ಯವಸ್ತೆಗಳು ಇರುವುದು ಒಂದು ಕಳಂಕ. ಕಾಪ್ ಪಂಚಾಯತಿಗಳ ಕ್ರೂರ ವರ್ತನೆಗಳು, ಕೆಲೋವೊಮ್ಮೆ ನಗೆಪಾಟಲಿಗೆ ಇಡಾಗುವ ಫ್ಹತ್ವಾಗಳು, ಇನ್ನು ಕೆಲವು ಪ್ರಚಲಿತವಿರುವ parallel ನ್ಯಾಯಸ್ತಾನಗಳು ಇವುಗಳೆಲ್ಲವನ್ನು ಒಂದೇ ವ್ಯವಸ್ತೆಯ ಅಡಿಯಲ್ಲಿ ತರುವುದು ಈಗಿನ ಅವಶ್ಯಕತೆಯಾಗಿದೆ. ಎನಂತಿರಿ?

Thursday, January 6, 2011

ನನ್ನ ಪ್ರೀತಿಯ ರಾಜಕಾರಣಿಗಳಿಗೆ ೩ ಪ್ರಶ್ನೆ ೧ ಸಲಹೆ !!!

ನನ್ನ ಪ್ರೀತಿಯ ರಾಜಕಾರಣಿಗಳಿಗೆ ೩ ಪ್ರಶ್ನೆ ೧ ಸಲಹೆ !!!

ಇಂದಿನ ನಮ್ಮ ರಾಜಕೀಯ ಪರಿಸ್ತಿತಿಯೇನ್ನು ನೋಡಿ ನಮ್ಮ ಪ್ರೀತಿಯ ರಾಜಕಾರಣಿಗಳಿಗೆ ೩ ಪ್ರಶ್ನೆಗಳನ್ನು ಕೇಳೋಣ ಅಂತ ಅಂದುಕೊಂಡಿದಿನೀ...
೧. ನಿಮಗೆ ಸಾಮಾನ್ಯರಂತೆ ಬದುಕಲು ಆಗುವುದಿಲ್ಲವೇ ?
ಇಂದು ಯಾವುದೇ ಪಕ್ಷ ಅತವಾ ವ್ಯಕ್ತಿಎನ್ನ ತೊಗೊಳ್ಳಿ ಎಲ್ಲರೂ ದುಡ್ಡು ದುಡ್ಡು ಅಂತಿದ್ದಾರೆ.
ಒಬ್ಬ ಸಾಮಾನ್ಯ ವ್ಯಕ್ತಿ ಎಲ್ಲ ಸವಲತ್ತುಗಳನ್ನು ಪಡೆದು, ಮನೆ ಮಟ ಮಾಡಿ, ಮಕ್ಕಳನ್ನ ಒಳ್ಳೆ ಶಾಲೆಗಳಿಗೆ ಸೇರಿಸಿ ಸಂತೋಷದಿಂದ ಬದುಕಲು ಕೇವಲ ೧ ಕೋಟಿಗಿಂತ [ಬೆಂಗಳೂರಲ್ಲಿ] ಕಡಿಮೆ ದುಡ್ಡು ಸಾಕು.
ಆದರೆ ಇವತ್ತು ರಾಜಕೀಯದಲ್ಲಿರೋ ಎಲ್ಲರೂ [೯೯%] ಕೋಟ್ಯದಿಪತಿಗಳೇ ಇದ್ದೀರಾ... ಆದರು ನಿಮಗೆ ಯಾಕೆ ಇಸ್ಟೊಂದು ಆಸೆ ಯಾರಿಗೋಸ್ಕರ ಇಸ್ಟೆಲ್ಲಾ ಆಸ್ತಿಯನ್ನ ಮಾಡ್ತಾ ಇದ್ದೀರಾ ... ನಿಮಗೂ ಗೊತ್ತು ನಮಗೂ ಗೊತ್ತು ಎಲ್ಲರೂ ಹೋಗುವಾಗ ಎನನ್ನು ತೆಗೆದುಕೊಂಡು ಹೋಗೋದಿಲ್ಲ ಅಂತ ಆದರೂ ...

೨. ನೀವು ಯಾಕೆ ಆತ್ಮವಂಚಕರಾಗಿ ಬದಕುತ್ತಾ ಇದ್ದೀರಿ ?
ನೀವು ಎಸ್ಟೊಂದು ತಪ್ಪುಗಳನ್ನ ಮಾಡಿದ್ದಿರೀ, ಮಾಡುತ್ತಇದ್ದೀರಿ ಅಂತ ನಮಗಿಂತ ನಿಮಗೆ ಚೆನ್ನಾಗಿ ಗೊತ್ತು ಆದರು ನೀವು ಏನು ಮಾಡಿಯೇ ಇಲ್ಲ ಅಂತೀರಾ.
ನೀವು ಮಾಡಿದ್ದೂ ತಪ್ಪು ಅಂತ ಒಬ್ಬ ಸಾಮಾನ್ಯನು ಹೇಳುತ್ತಾನೆ... ಲಂಚ ತೊಗೊತಿರಿ, ಧಮಕಿ ಹಾಕಸ್ತಿರಿ, ಸರಕಾರಿ ದುಡ್ಡನ್ನ/ಜಾಗವನ್ನ/ವಸ್ತುಗಳನ್ನ/ಮೋಟಾರುಗಳನ್ನ ಗುಳುಂ ಅನಸ್ತಿರಿ, ಗುಂಡಾಗಳನ್ನ ಸಾಕುತ್ತಿರೀ ... ಅಬ್ಬಾ ಒಂದಾ ಎರಡಾ .... ಇಸ್ಟೆಲ್ಲಾ ಮಾಡಿದ್ದು ನಿಮಗೂ ಗೊತ್ತು ಆದರು ಯಾಕೆ ನೀವು ಆತ್ಮವಂಚಕರಾಗಿ, ಸಬ್ಯರತರ ನಟಸ್ತಿರಿ.
ಅತವಾ ನಿಮಗೆ ಆತ್ಮ ಅನ್ನೋದೇ ಇಲ್ಲವಾ ಹೇಗೆ ?

೩. ನಿಮ್ಮ ನಡವಳಿಕೆ ಅಧಿಕಾರದಲ್ಲಿದ್ದಾಗ ಬೇರೆ ಇಲ್ಲದಿದ್ದಾಗ ಬೇರೆ ಯಾಕೆ ?
ನಾನು ಎಸ್ಟೊಂದು ರಾಜಕೀಯ ವ್ಯಕ್ತಿಗಳ ಬಗೆಗಿನ ವಿವರಗಳನ್ನ ನೋಡಿದೆ ಎಲ್ಲರೂ ಎಸ್ಟೊಂದು ಒಳ್ಳೆಯವರು, ಎಸ್ಟೊಂದು ಹೋರಾಟಗಳನ್ನ ಮಾಡಿದ್ದಾರೆ, ಒಳ್ಳೊಳ್ಳೆಯ ಮಾತುಗಳನ್ನ ಆಡಿದ್ದಾರೆ, ಬಡಬಗ್ಗರಿಗೆ ಸಹಾಯ ಮಾಡಿದ್ದಾರೆ ಆದರೆ ಇ ಎಲ್ಲವನ್ನು ಅವರು ವಿರೋಧ ಪಕ್ಷದಲ್ಲಿದ್ದಾಗ ಮಾಡಿದ್ದಾರೆ. ಅಂದರೆ ಇವೆಲ್ಲ ನೀವು ಅಧಿಕಾರ ಹಿಡಿಯಲು ಮಾಡಿರುವ/ಆಡಿರುವ ನಾಟಕಗಳಾ ? ಏಕೆಂದರೆ ಅದೇ ವ್ಯಕ್ತಿಗಳು ಅಧಿಕಾರ ಹಿಡಿದಮೇಲೆ ಎಸ್ಟೊಂದು ಭ್ರಷ್ಟಾಚಾರ, ಅನ್ನ್ಯಾಯಗಳನ್ನ ಮಾಡಿದ್ದಾರೆ ಅಂದರೆ ಅವುಗಳಿಗೆ ಲೆಕ್ಕವಿಲ್ಲ.
ಇದು ಯಾಕೆ ಹೀಗೆ, ಅಧಿಕಾರದ ಮುಂದೆ ಒಳ್ಳೆಯತನ ನಿಲ್ಲೋದಿಲ್ಲವಾ ? ಇದು ನಿಜ ಅಂದರೆ ನೀವು ಅಧಿಕಾರದಲ್ಲಿ ಇರೋದೇ ಬೇಡಾ.

ಸಲಹೆ :
ದಯವಿಟ್ಟು ನೀವು ದುಡ್ಡುಮಾಡೋದಕ್ಕೆ ರಾಜಕೀಯ ಸೇರಬೇಡಿ ... ಯಾಕಂದರೆ ದುಡ್ಡು ಮಾಡೋದಕ್ಕೆ ನಾನಾ ದಾರಿಗಳಿವೆ.
ನಿಮ್ಮ ಮಕ್ಕಳಿಗೆ ಚೆನ್ನಾಗಿ ಜೀವನ ಮಾಡಲು ಕಲಿಸೋ ಶಕ್ತಿ ಇಲ್ಲಾ ಅಂದರೆ ಮಕ್ಕಳನ್ನ ಹಡಿಯಬೇಡಿ ಯಾಕಂದರೆ ನೀವು ಮಾಡೋ ಎಲ್ಲ ತಪ್ಪುಗಳು ನಿಮ್ಮ ಮಕ್ಕಳಿಗೊಸ್ಕರಣೆ.
ಇನ್ನು ಉಳಿದ ಸಲಹೆಗಳನ್ನ ಇ ಕೆಳಗಿನ ಗೆಳೆಯರು ಕೊಡ್ತಾರೆ ಕೇಳಿ :)

ನಿಮ್ಮ,
ಪ್ರಶಾಂತ್